WELCOME TO GLPS MAJIBAIL

29 Oct 2022

'ಮಾದಕ ವಸ್ತು ಮುಕ್ತ ಕೇರಳ

    ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ 'ಮಾದಕ ವಸ್ತು ಮುಕ್ತ ಕೇರಳ 'ಎಂಬ ಕಾರ್ಯಕ್ರಮದ ಎರಡನೇ ಹಂತo ಭಾಗವಾಗಿ ದಿನಾಂಕ 28/10/2022ನೇ ಶುಕ್ರವಾರದಂದು ಆಯೋಜಿಸಲಾಯಿತು.ಶಾಲಾ ಮಕ್ಕಳು ಮಾದಕ ವಸ್ತು ಸೇವನೆಯ ವಿರುದ್ಧ ಪೋಸ್ಟರ್ ಗಳನ್ನು ರಚಿಸಿದರು. ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಿದರು.








ದೀಪಾವಳಿ ಹಬ್ಬ ಆಚರಣೆ

🪔🪔🪔ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ನಿವೃತ್ತಿ ಮುಖ್ಯ ಉಪಾಧ್ಯಾಯರಾದ ಶ್ರೀ ಎಂ.ಜಿ ನಾರಾಯಣರಾವ್, ಎಂ.ಪಿ.ಟಿ.ಎ ಅಧ್ಯಕ್ಷೆ ರೆಹಮತ್, ಮುಖ್ಯೋಪಾಧ್ಯಾಯದ ಶ್ರೀ ಸುರೇಶ ಬಂಗೇರ ಸರ್ ಅವರು ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಕುರಿತಾಗಿ ಮುಖ್ಯೋಪಾಧ್ಯಾಯರು ಶುಭ ಹಾರೈಸುವುದರೊಂದಿಗೆ ಹಬ್ಬದ ಮಹತ್ವವನ್ನು ತಿಳಿಸಿದರು. ಶ್ರೀ ಎಂ.ಜಿ ನಾರಾಯಣ ರಾವ್ ಅವರು ಕೂಡ ದೀಪಾವಳಿ ಹಬ್ಬದ ಶುಭ ಸಂದೇಶ  ನೀಡಿದರು. ಮಕ್ಕಳು ಅಧ್ಯಾಪಕರು ಮತ್ತು ಹೆತ್ತವರು ಸೇರಿಕೊಂಡು ಹಣತೆಯನ್ನು ಹಚ್ಚಿ ಸಂಭ್ರಮಿಸಿದರು. ಜೊತೆಗೆ ಕೆಲವೊಂದು ಪಟಾಕಿಗಳನ್ನು  ಸಿಡಿಸಿ ಮಕ್ಕಳಿಗೆ ಖುಷಿ ಹಂಚಲಾಯಿತು. ಬಂದ ಎಲ್ಲಾ ಹೆತ್ತವರಿಗೂ ಮಕ್ಕಳಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.ಅದೇ ರೀತಿ ದೀಪಾವಳಿ ಹಬ್ಬದ ಪ್ರಯುಕ್ತ ಎರಡನೇ ತರಗತಿಯ ಭವಿಕ್ ಮತ್ತು ಒಂದನೇ ತರಗತಿಯ ಸಾನ್ವಿಯ ಮನೆಯವರು ವಿವಿಧ ಬಗೆಯ ಪಟಾಕಿಗಳನ್ನು  ನೀಡಿ ಸಹಕರಿಸಿದರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಲಾಯಿತು.🪔🪔🪔































22 Oct 2022

ಶಾಸ್ತ್ರೋತ್ಸವ ಮೇಳ

      2022-23ನೇ ವರ್ಷದ ಮಂಜೇಶ್ವರ  ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಮೇಳವು ಜಿ.ಎಚ್.ಎಸ್.ಎಸ್ ಬೇಕೂರು ಶಾಲೆಯಲ್ಲಿ ದಿನಾಂಕ 21/10/2022 ರಿಂದ 22/10/2022 ರ ವರೆಗೆನಡೆಯಿತು. ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನ ವಿದ್ಯಾರ್ಥಿಗಳು ಗಣಿತ ಮೇಳ,ವಿಜ್ಞಾನ ಮೇಳ,ವೃತ್ತಿ ಪರಿಚಯ ಮೇಳ ಸಮಾಜ ವಿಜ್ಞಾನ ಮೇಳ ಎಂಬಿವುಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ತೋರಿದರು.















6 Oct 2022

ಮಾದಕ ವಸ್ತು ಮುಕ್ತ ಕೇರಳ ಯೋಜನೆ

ಮಾದಕ ವಸ್ತು ಮುಕ್ತ ಕೇರಳ ಯೋಜನೆ 

    ಶಾಲಾಮಟ್ಟದ ವರದಿ 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು

   ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ಮಾದಕ ವಸ್ತು ಮುಕ್ತ ಕೇರಳ ಎಂಬ ಕಾರ್ಯಕ್ರಮವನ್ನು  ದಿನಾಂಕ 06/102022 ಗುರುವಾರದಂದು ಆಯೋಜಿಸಲಾಯಿತು.ಯುವ ಜನತೆಯನ್ನು ದಾರಿ ತಪ್ಪಿಸುತ್ತಿರುವ ಮಾದಕ ವಸ್ತುಗಳನ್ನು ಕೇರಳದಿಂದ ಮುಕ್ತವಾಗಿಸುವ ಕೇರಳ ಸರಕಾರ ಯೋಜನೆಯಾದ ಮಾದಕ ವಸ್ತು ಮುಕ್ತ ಕೇರಳ ಎಂಬ ಕಾರ್ಯಕ್ರಮಕ್ಕೆ ದಿನಾಂಕ 06/10/2022 ರಂದು  ರಾಜ್ಯಮಟ್ಟದಲ್ಲಿ ಚಾಲನೆ ನೀಡಲಾಯಿತು.ಬೆಳಗ್ಗೆ 10 ಗಂಟೆಗೆ ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಪಿಣರಾಯಿ ವಿಜಯನ್ ಅವರು  ಸಮೂಹ ಮಾಧ್ಯಮದ ಮೂಲಕ ಉದ್ಘಾಟಿಸಿದ ಈ ಕಾರ್ಯಕ್ರಮವನ್ನು ಎಲ್ಲ ಮಕ್ಕಳೂ ಹೆತ್ತವರೂ  ವೀಕ್ಷಿಸುವ ವ್ಯವಸ್ಥೆ ಮಾಡಿಕೊಡಲಾಯಿತು. 





ಶಾಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಾಗಳಾದ ಶ್ರೀ ಎಂ.ಜಿ ನಾರಾಯಣರಾವ್ ,ಎಸ್ ಎಂ ಸಿ ಅಧ್ಯಕ್ಷರಾದ ಆಶಾಲತಾ ಆಳ್ವ ,ಎಂ. ಪಿ .ಟಿ ಅಧ್ಯಕ್ಷೆ ಪವಿತ್ರ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದಶ್ರೀ ಸುರೇಶ ಬಂಗೇರ ಸರ್ ಅವರು  ಎಲ್ಲಾ ರಕ್ಷಕರಿಗೂ ಈ ಕಾರ್ಯಕ್ರಮದ ಉದ್ದೇಶ ಮತ್ತು 

ಅಗತ್ಯತೆಯನ್ನು ತಿಳಿಸಿದರು. ಎಲ್ಲಾ ರಕ್ಷಕರಿಗೂ ಮಾದಕ ವಸ್ತು ಮುಕ್ತ ಕೇರಳ ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದ ವೀಡಿಯೋ ತೋರಿಸಲಾಯಿತು.







ಎಲ್ಲಾ ತರಗತಿಗಳಲ್ಲಿ ತರಗತಿ ಸಿ. ಪಿ .ಟಿ.ಎ ನಡೆಸಿ ರಕ್ಷಕರಿಗೆ ಮಕ್ಕಳು ಪಾಲಿಸಬೇಕಾದ ಉತ್ತಮ ಗುಣಗಳು ಉತ್ತಮ ಆರೋಗ್ಯ ಅಭ್ಯಾಸಗಳು ಇತ್ಯಾದಿಗಳ ಕುರಿತು ಕಿವಿ ಮಾತುಗಳನ್ನು ಹೇಳಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಟೀಚರ್ ಸ್ವಾಗತಿಸಿದ ಈ ಕಾರ್ಯಕ್ರಮವು ಶಾಲಾ ಶಿಕ್ಷಕ ಶ್ರೀ ದೇವಾನಂದ ಅವರು ಧನ್ಯವಾದಗೈಯುವುದರೊಂದಿಗೆ ಮುಕ್ತಾಯವಾಯಿತು.