WELCOME TO GLPS MAJIBAIL

28 Nov 2022

ಗಾಳಿಪಟ ತಯಾರಿ

 ದಿನಾಂಕ 28/11/2022 ಸೋಮವಾರದಂದು ಒಂದನೇ ತರಗತಿಯ ಮಕ್ಕಳು ಗಾಳಿಪಟವನ್ನು ತಯಾರಿಸಿ ಖುಷಿಪಟ್ಟರು👇





















ಅಭಿನಯ ತಯಾರಿ

 28/11/2022 ಸೋಮವಾರದಂದು ಪುಣ್ಯಕೋಟಿ ಎಂಬ ಹಾಡಿನ ನಾಟಕ ಅಭಿನಯಕ್ಕಾಗಿ ಮುಖವಾಡಗಳನ್ನು ತಯಾರಿಸಿ ಸಜ್ಜಾಗುತ್ತಿರುವ ನಾಲ್ಕನೇ ತರಗತಿಯ ಮಕ್ಕಳು......














ಶಾಲೆಯಲ್ಲಿ ಬೆಳೆದ ಬಾಳೆಗೊನೆ





IDPD DAY 2022

     IDPD DAY 2022(international day of persons with disability) ರ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿಭಿನ್ನ ಸಾಮರ್ಥ್ಯವಿರುವ ಮೂರನೇ ತರಗತಿಯ  ಮಗುವಾದ 'ಸಮರ್ಥ್' ನ ಸಮ್ಮುಖದಲ್ಲಿ ವಿಶೇಷ ಅಸೆಂಬ್ಲಿಯನ್ನು ನಡೆಸಲಾಯಿತು.  ವಿಭಿನ್ನ ಸಾಮರ್ಥ್ಯವಿರುವ  ಮಕ್ಕಳಿಗೂ ಇತರರಿಗೆ ತೋರುವ ಪ್ರೀತಿಯನ್ನೂ ಕಾಳಜಿಯನ್ನೂ ತೋರಿಸಬೇಕೆಂದು  ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ  ಬಂಗೇರ ಸರ್ ಅವರು ತಿಳಿಸಿದರು.








26 Nov 2022

ಶಾಲಾ ಕಲೋತ್ಸವ 2022

     2022-23 ನೇ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಎಸ್.ವಿ.ಎಚ್ ಎಸ್.ಎಸ್ ಮತ್ತು ವಿ.ಎ.ಯು.ಪಿ.ಯಸ್ ಮೀಯಪದವಿನಲ್ಲಿ ಜರುಗಿತು. ದಿನಾಂಕ 22/10 2022 ರಿಂದ ಆರಂಭಿಸಿ 25/10/2022 ರವರೆಗೆ ಸತತ ನಾಲ್ಕು ದಿನಗಳ ಕಾಲ ಬಹು ವಿಜೃಂಭಣೆಯಿಂದ ಮೇಳೈಸಿತು. ನಮ್ಮ ಶಾಲೆಯ ಪುಟಾಣಿಗಳು ಕೂಡ ಕಲೋತ್ಸವದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಜೊತೆಗೆ ಶಾಲೆಗಳಿಗೆ ಉತ್ತಮವಾದ ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು.















25th PLACE IN LP GENERAL 



23rd PLACE IN LP KANNADA SCHOOLWISE POINT



17 Nov 2022

'ಕೇರಳ ಶಾಲಾ ಪಠ್ಯಕ್ರಮ ಪರಿಷ್ಕರಣೆ _ಮಕ್ಕಳ ಚರ್ಚೆ

'ಕೇರಳ ಶಾಲಾ ಪಠ್ಯಕ್ರಮ  ಪರಿಷ್ಕರಣೆ 'ಇದರ ಅಂಗವಾಗಿ ಸಾರ್ವಜನಿಕ ಚರ್ಚೆಯು ದಿನಾಂಕ 08/11/2022 ನೇ ಮಂಗಳವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ  ಜರಗಿತು. 









 

14 Nov 2022

ಮಕ್ಕಳ ದಿನಾಚರಣೆ


     ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳೆಲ್ಲರೂ  ಶುಭಾಶಯ ಪತ್ರಗಳನ್ನು ತಯಾರಿಸಿದರು. ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಮಕ್ಕಳಿಗಾಗಿ ಸ್ಮರಣ ಶಕ್ತಿ ಸ್ಪರ್ಧೆ, ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ ಬಂಗೇರ ಸರ್ ಅವರು  ಮಕ್ಕಳ ದಿನಾಚರಣೆಯ ಸಂದೇಶವನ್ನು ತಿಳಿಸಿದರು.




Thanishka  of 1std donated a book to the school library.

 

8 Nov 2022

ಕೇರಳ ಶಾಲಾ ಪಠ್ಯಕ್ರಮ ಪರಿಷ್ಕರಣೆ----ಸಾರ್ವಜನಿಕ ಚರ್ಚೆ

      ಕೇರಳ ಶಾಲಾ ಪಠ್ಯಕ್ರಮ  ಪರಿಷ್ಕರಣೆ 'ಇದರ ಅಂಗವಾಗಿ ಸಾರ್ವಜನಿಕ ಚರ್ಚೆಯು ದಿನಾಂಕ 08/11/2022 ನೇ ಮಂಗಳವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿ ಬೈಲಿನಲ್ಲಿ  ಜರಗಿತು. ಮಜಿ ಬೈಲು ವಾರ್ಡಿನ ಸದಸ್ಯೆ ಶ್ರೀಮತಿ ಆಶಾಲತ ಬಿ.ಎಮ್ , ಎಸ್ ಎಂ. ಸಿ ಅಧ್ಯಕ್ಷೆ ಆಶಾಲತಾ ಆಳ್ವ, ಬಿ ಆರ್ ಸಿ ಯ ಸಿ .ಆರ್. ಸಿ ಕೋ ಆರ್ಡಿನೇಟರ್ ಮೀನಾಕ್ಷಿ ಬೊಡ್ಡೋಡಿ, ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಯುತ ಸುರೇಶ ಬಂಗೇರ ಸರ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಕ್ಷಕರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ  ಟೀಚರ್ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ್ ಬಂಗೇರ ಸರ್ ರವರು ಕಾರ್ಯಕ್ರಮವನ್ನು ಮುನ್ನಡೆಸಿದರು.